ಸುಗ್ಗಿ

ಹೆಜ್ಜೆ ಹೆಜ್ಜೆ ಗೀತೆ ಹಾಡಿ
ಘಳಿರ್ ಘಳಿರ್ ಘಳಿರ್
ಎಳ್ಳು ಸಜ್ಜೆ ರಾಗಿ ಜೋಳ
ಭತ್ತದ ರಾಶಿ ರಾಶಿ ಸುಗ್ಗಿಯಮ್ಮಾ ||

ಕಷ್ಟ ಪಟ್ಟು ರಟ್ಟೆ ಮುರಿದು
ಬೆವರು ಸುರಿಸಿ ದುಡಿದ ರೈತ
ವರುಷ ವರುಷ ಅವಗೆ ಹರುಷ
ತುಂಬಿ ರಾಶಿ ರಾಗಿ ಸುಗ್ಗಿಯಮ್ಮಾ ||

ಕಬ್ಬು ಹೆಸರು ತೊಗರಿಬೆಳೆ
ಅವರೆ ಕಡಲೆಕಾಯಿ ಎಳ್ಳು
ಅಲಸಂದೆ ಎಲ್ಲಾ ಬೆಳೆಯ ಸುಗ್ಗಿ
ಬೆಳ್ಳಿ ಕಡಗ ಹೈಕಳ ಜೋಡಿಯಮ್ಮಾ ||

ತಳಿರು ತೋರಣ ಬಾಗಿ ಬಾಗಿಲ
ಬಾಳೆ ಹಾಸಿ ಕುಡಿಕೆ ಮಡಿಕೆಯ
ಪೂಜೆ ಮಾಡಿ ಕುಣಿದು ನಲಿದು
ಪುಟ್ಟ ಮಕ್ಕಳ ಸೆಳೆದ ಆರತಿಯಮ್ಮಾ ||

ಸ್ನೇಹ ಬಾಳ್ವೆ ತರುವ ಸುಗ್ಗಿ
ಮನೆ ಮನವನು ಅರಳಿಸಿ
ಜಗಕೆ ಉಸಿರ ತುಂಬಿ ನಗಿಸಿ
ಹರುಷ ತಂದಾನೋ ತಾನೋ ಸಂಕ್ರಾಂತಿಯಮ್ಮಾ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!
Next post ಕಾದಿಹೆನು ನಿನಗಾಗಿ…..

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys